Saturday 24 April 2021

ಸಾರಿಗೆ ಮುಷ್ಕರ 2021, ಚೋಳರಾಜ್, ಬಳ್ಳಾರಿ

 

ಸಾರಿಗೆ ನೌಕರರ ಮುಷ್ಕರ! 2021

 ಜೈಲು ಸೇರಿದವರೆಷ್ಟು?  ಕೆಲಸ ಕಳೆದುಕೊಂಡವರೆಷ್ಟು? ಅಮಾನತ್ತು ಆದವರೆಷ್ಟು?  ವರ್ಗಾವಣೆ ಆದವರೆಷ್ಟು ? ಸತ್ತವರು ಎಷ್ಟು ? ನೌಕರರ ಮೇಲೆ FIR ದಾಖಲಾದವರು ಎಷ್ಟು ?



*ಚೋಳರಾಜ್, ಬಳ್ಳಾರಿ.*


ತಮ್ಮ‌ ಪ್ರಚಾರಕ್ಕೆ ಸಾರಿಗೆ ನೌಕರರನ್ನು ಬಳಸಿಕೊಂಡ್ರ ಕೋಡಿಹಳ್ಳಿ ಚಂದ್ರಶೇಖರ್ ?


 ಮುಷ್ಕರ ಅಂತ್ಯದಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ರು, ಆದ್ರೆ ನೌಕರರ ಸ್ಥಿತಿ ಏನಾಯ್ತು?


 ಕರ್ನಾಟಕದಲ್ಲಿ 2,941 ಸಾರಿಗೆ ನೌಕರರನ್ನು ಅಮಾನತ್ತು ಮಾಡಲಾಗಿದೆ ಹಾಗೂ 2,169  ಸಾರಿಗೆ ನೌಕರರನ್ನು ವಜಾಗೊಳಿಸಲಾಗಿದೆ.  7646 ನೌಕರರಿಗೆ ಶೋಕಾಸ್ ನೋಟಿಸ್ ನೀಡಿದೆ. 8000 ಕ್ಕೂ ಹೆಚ್ಚು ನೌಕರರನ್ನು ದೂರದ ಘಟಕಗಳಿಗೆ ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಲಾಗಿದೆ. ಎಷ್ಟೋ ಯುವಕರು ತಮ್ಮ ಟ್ರೈನಿಂಗ್ ಅವದಿಯಲ್ಲಿಯೇ ಉದ್ಯೋಗವನ್ನು ಕಳೆದು ಕೊಂಡರು.

ಎಷ್ಟೋ ನೌಕರರ ಮೇಲೆ FIR ಆಯ್ತು, 59 ವರ್ಷದ ಚಾಲಕ, ಬಸ್ ಚಾಲನೆ ಮಾಡುತ್ತಲೇ ಕೊನೆಯುಸಿರೆಳೆದರು. 



ಕೋಡಿಹಳ್ಳಿ ಚಂದ್ರಶೇಖರ್ ರವರೇ ಈ ನಿಮ್ಮ ಮಾತಿಗೆ ಬೆಲೆ ಕೊಟ್ಟು ಮುಷ್ಕರ ಮಾಡಿದ ಈ ಕಾರ್ಮಿಕ ಕುಟುಂಬಗಳಿಗೆ ನೀವು ಹೇಗೆ ಆರ್ಥಿಕ ಭದ್ರತೆ ನೀಡುತ್ತೀರಿ?


ಸಮಯ ಬಂದಾಗ ಹೆಗಲ ಮೇಲೆ ಹಸಿರು ಶಾಲು, ನಿಮ್ಮ ಸಮಯ ಕೆಟ್ಟಾಗ ಸಾರಿಗೆ ನೌಕರರೇ ಬೇಕಿತ್ತಾ ನಿಮಗೆ  ನಿಮ್ಮ‌ಅಸ್ತಿತ್ವ ಉಳಿಸಿಕೊಳ್ಳಲು ?


ಸಂಘಟನೇ ರಚನೆ ಮಾಡೀ ಆ ಸಂಘದ ಅಧ್ಯಕ್ಷ ಆಗೋದು ದೊಡ್ಡದಲ್ಲ. ನಿಮಗೆ ತಾಕತ್ತು ಇದ್ರೆ, 'S' ಮಾರ್ಕ್ ಹಾಗೂ "8" ಮಾರ್ಕ್ ಗಳ್ಲಲ್ಲಿ KSRTC ಬಸ್ ಅನ್ನು ಚಲಾಯಿಸಿ ಒಂದು ಡ್ರೈವರ್ ಹುದ್ದೆ ಪಡೆದು ನೋಡಿ, ಅದರ ಕಷ್ಟ ಎಷ್ಟು ಅಂತ ತಿಳಿಯುತ್ತೆ. ಒಬ್ಬ ಡ್ರೈವರ್‌ ಗೆ ಇರುವ ಕೌಶಲ್ಯ ನಿಮ್ಮಲ್ಲಿ ಇಲ್ಲವಲ್ಲ. 


ಒಂದು ಸ್ಪಾನರ್ ಹಿಡಿದು ಪಂಕ್ಚರ್ ಆದ ಬಸ್ಸಿನ ಟೈರ್ ತಗೆದು ಅದನ್ನು ಫಿಕ್ಸ್ ಮಾಡಿ ನೋಡಿ! ಅವರ ಕಷ್ಟ ಏನು ಅಂತ ಅರ್ಥ ಆಗುತ್ತದೆ. 


ಟಿಕೆಟ್ ಟಿಕೆಟ್ ಎಂದು ಬಸ್ಸಿನ ಆ ತುದಿಯಿಂದ ಈ ತುದಿಯವರೆಗೆ ತುಂಬು ಗರ್ಭಿಣಿ ಆಚೀಚೇ ಓಡಾಡೂತ್ತಾ, ತನ್ನ ದೇಹ ಹಾಗೂ ಆರೋಗ್ಯವನ್ನು ಲೆಕ್ಕಿಸದೇ ಸಂಸ್ಥೆಗೆ ದುಡಿಯಿತ್ತಿರುವ ಮಹಿಳಾ ಕಂಡಕ್ಟರ್ ಗಳ ಪರಿಸ್ಥಿತಿ ಯನ್ನು ಅರಿತುಕೊಳ್ಳಿ.


ಅನಾವಶ್ಯಕ ವಾಗಿ ಕೋವಿಡ್ ಸಮಯದಲ್ಲಿ ಮುಷ್ಕರಕ್ಕೆ ಕರೆ ಕೊಟ್ಟು ಸಾರಿಗೆ ನೌಕರರನ್ನು ಬೀದಿ ಪಾಲು ಮಾಡಿಬಿಟ್ಟಿರೀ ನೀವು. 


ಕೆಲವೇ ದಿ‌ನಗಳ ಹಿಂದೆ  ಖಾಸಗಿ ಶಾಲೆಯ ಶಿಕ್ಷಕರು, ತರಕಾರಿ ಮಾರಿ, ಹೋಟೆಲ್ ನಲ್ಲಿ ಕೆಲಸ ಮಾಡಿದ ಹಾಗೇ ಸಾರಿಗೆ ನೌಕರರನ್ನೂ ಕೂಡ ನೀವು ಇದೇ ದಾರಿಗೆ ತಂದು ಬಿಟ್ರಲ್ಲ ಮಿಸ್ಟರ್ ಕೋಡಿಹಳ್ಳಿ ಚಂದ್ರಶೇಖರ್.!


ಎಷ್ಟೋ ಯುವಕರ ಜೀವನ ಪ್ರಾರಂಭವಾಗುವ ಹೊಸ್ತಿಲಲ್ಲೇ ಅವರ ಕನಸನ್ನು ನುಚ್ಚು ನೂರು ಮಾಡಿಬಿಟ್ರಲ್ಲ ನೀವು.


ಪ್ರತಿದಿನ, ಒಂದೊಂದು ವಿಧವಾದ ಮುಷ್ಕರಕ್ಕೆ ನೀವು ಬಾರಿಸಿದ ತಾಳಕ್ಕೆ ಕುಣಿದ ನೌಕರರು, ನಿಮ್ಮನ್ನೇ ದೇವರು ಎಂದು ತಿಳಿದವರು. ಅವರ ಪಾಲಿಗೆ ನೀವು ದೆವ್ವ ಆಗ್ತಿರಿ ಅಂತ ಅವರು ಕೂಡ ನಿರೀಕ್ಷಿಸಿರಲಿಲ್ಲ.


ನೀವು ರಾಜ್ಯಮಟ್ಟದ ಅಧ್ಯಕ್ಷರು, ನಿಮ್ಮ ಬೇಳೆ ಬೇಯಿಸಲು ಕೇವಲ ಎಸ್, ಎಸ್, ಎಲ್, ಸಿ. ಹಾಗೂ ಪಿಯುಸಿ ಓದಿರುವ ನೌಕರರನ್ನು ನೀವು ಮುಂದಿಟ್ಟುಕೊಂಡು, ಅವರ ಜೀವ ಹಾಗೂ ಜೀವನದ ಜೊತೆ ಆಟ ಆಡಿದ್ದು ಸರಿನಾ ?



ಅಧ್ಯಕ್ಷರಾಗಿ ನೀವು !


* ಮುಷ್ಕರಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ಮಾಡಲಿಲ್ಲ! 


* ಸಾರಿಗೆ ಸಚಿವರ ಜೊತೆ ಮಾತಾಡಲಿಲ್ಲ!


* ಸಾರಿಗೆ ನೌಕರರ ಸಮಸ್ಯೆ ಬಗೆ ಹರಿಯಲಿಲ್ಲ!



* ನಿಗಮ/ ಮಂಡಳಿ / ಸಂಸ್ಥೆಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದ್ದರೂ, ಅದೇ ವಿಚಾರನ್ನೂ ಪ್ರಮುಖ ವಿಷಯವಾಗಿ ಇಟ್ಟುಕೊಂಡು ನೀವು ಮುಷ್ಕರಕ್ಕೆ ಕರೆ ನೀಡಿದ್ರಿ. ಇದು ಸಾರಿಗೆ ನೌಕರರಿಗೆ ಪರೋಕ್ಷ ವಾಗಿ ಮಾಡಿದ ಮೋಸ ಅಲ್ಪ  ಕೋಡಿಹಳ್ಳಿ! 


* 6ನೇ ವೇತನ ಆಯೋಗ ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸುತ್ತದೆ ಎಂದು ನಿಮಗೆ ತಿಳಿದಿದ್ದರೂ, ಈಡೇರಿಸಲಾಗದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೀವು ನಿಮ್ಮ ಹೆಸರನಿಂದ ಮಾತ್ರ ಪ್ರತಿದಿನ ನೀವು ಮಾದ್ಯಮ ಗಳಲ್ಲಿ ಸದ್ದು ಮಾಡಿದ್ರಿ.


ನೀವು ನಿಜವಾಗಿಯು ಸಾರಿಗೆ ನೌಕರರ ಅಧ್ಯಕ್ಷರಾಗಿದ್ದರೇ ? 


ನೀವು ಮೊದಲು ತಿಳಿಯಬೇಕಾದದ್ದು ಈ ಅಂಶಗಳನ್ನು.


1. ಬೆಂಗಳೂರಿನ ಹಾಗೂ ಇತರ ಜಿಲ್ಲೆಗಳ ಬಸ್ ಸ್ಟಾಂಡ್ ಪಕ್ಕದಲ್ಲಿನ ಪುಟ್ ಪಾತ್ ನಲ್ಲಿ ಇರುವ ಹೋಟೆಲ್ ಗಳಲ್ಲಿ ಸಾರಿಗೆ ನೌಕರರ ಊಟ, ಟೀ, ಟಿಫಿನ್. 

ಅವುಗಳ ಶುದ್ಧತೆ, ನೈರ್ಮಲ್ಯತೆ ಯ ಬಗ್ಗೆ ನಿಮಗೆ ಹೇಳಬೇಕಿಲ್ಲ.


2. ಇಲ್ಲಿಯವರೆಗೆ ಅವರಿಗೆ ಶುದ್ದವಾದ ಕುಡಿಯುವ ನೀರಿನ ಸೌಲಭ್ಯ ನೀಡಿಲ್ಲ. 

ಡ್ರೈವರ್ ಪಕ್ಕದ ಸೀಟಿನಲ್ಲಿ , ಒಂದು ಪ್ಲಾಸ್ಟಿಕ್ ಬಾಟಲಿಯ ಮೇಲೆ ಗೋಣಿ ಚೀಲದ ತುಂಡನ್ನು ಸುತ್ತಿ ಅದೇ ಬಾಟಲಿಯಲ್ಲಿನ ನೀರನ್ನು ತಂಪು ಮಾಡಿ ಕುಡಿಯಲು ವ್ಯವಸ್ಥೆ ಮಾಡಿಕೊಂಡಿರುತ್ತಾರೆ. 


3.  ಯಾವ ಊರಲ್ಲಿ ಬಸ್ ಹಾಲ್ಟಿಂಗ್ ಆಗುತ್ತೋ ಅದೇ ಅವರ ನಿದ್ದೆಯ ಸ್ಥಳ, ಬಸ್ಸಿನ ಸೀಟ್ ಗಳೇ ಅವರಿಗೆ ಮಲಗುವ ಬೆಡ್. ಅವರಿಗೆ ಅದ್ಯಾವ ಜಾತಿಯ ಸೊಳ್ಳೆ ಕಡಿಯುತ್ತೋ ಆ ದೇವರೇ ಬಲ್ಲ.

ನೈಟ್ ಹಾಲ್ಟ್ ಆಗುವ ಚಾಲಕ ಹಾಗೂ ನಿರ್ವಾಹಕರಿಗೆ ಒಂದೇ ಒಂದು ಸೊಳ್ಳೆ ಪರದೇಯನ್ನು ನೀಡುವ ಪದ್ದತಿ ಸಂಸ್ಥೆ ಯಲ್ಲಿಲ್ಲ.

ಕೇವಲ ಒಂದೇ ಒಂದು ರಾತ್ರಿ ಸಾರಿಗೆ ಬಸ್ ನಲ್ಲಿ ಮಲಗಿ ನೋಡಿ ನಂತರ ನಿಮ್ಮ ಅನುಭವ ಹಂಚಿಕೊಳ್ಳಿ ಮಿಸ್ಟರ್ ಕೋಡಿಹಳ್ಳಿ .


4. ಸಾರಿಗೆ ನೌಕರರು ಎಲ್ಲಿ ಸ್ನಾನ ಮಾಡುತ್ತಾರೆ, ಎಲ್ಲಿ ಬಟ್ಟೆ ಬದಲಿಸುತ್ತಾರೆ, ಅವರಿಗೆ ಶೌಚಾಲಯದ ವ್ಯವಸ್ಥೆ ಹೇಗಿದೆ ಎಂಬುದರ ಬಗ್ಗೆ ನಿಮಗೆ ಅರಿವಿದೆಯೇ? 

ಅದರಲ್ಲೂ ಮಹಿಳಾ ನೌಕರರ ಸಮಸ್ಯೆ ನಿಮಗೆ ಅರಿವಿದೇಯೇ ?


4. KSRTC, KEB ಹಾಗೂ POLICE ಈ ಇಲಾಖೆಗಳಲ್ಲಿ FDA, SDA , ಹಾಗೂ ಇತರ ಹುದ್ದೆಗಳನ್ನು KPSC ಅಥವಾ ಸರ್ಕಾರದಿಂದ ನೇಮಕವಾಗಲ್ಲ. ಯಾಕೆಂದ್ರೆ ಈ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವವರ ಆಯಸ್ಸು ತುಂಬಾ ಕಡಿಮೆ. 

ಈ ಮೂರು ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ FDA, SDA, ಹಾಗೂ ಇತರ ನೌಕರರು ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದುಕೊಂಡವರು.


5. 50 ವರ್ಷ ಪೂರೈಸಿದ ಸಾರಿಗೆ ನೌಕರರ ಅನುಭವ ಹಾಗೂ ದತ್ತಾಂಶವನ್ನು ನೋಡಿ, ಬಹುತೇಕರು ಹೃದಯ ಸಮಸ್ಯೆ, ಬ್ರೈನ್ ಸಮಸ್ಯೆ, ಪ್ಯಾರಲಿಸಿಸ್, ಕಿಡ್ನಿ ಸಮಸ್ಯೆ ಹಾಗೂ ಇತರ ತೀವ್ರ ತರಹದ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಇವುಗಳಿಗೆ ಕಾರಣಗಳನ್ನು ಪತ್ತೆಹಚ್ಚಲು ಪ್ರಯತ್ನಿಸಿ


6. ಸಾರಿಗೆ ಸಿಬ್ಬಂದಿ ಗಳ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಒಮ್ಮೆ ತಿಳಿದು ನೋಡಿ ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.


7. Over Time ಎಂಬ ಹೆಸರಿನಲ್ಲಿ ಅವರನ್ನು ಹಗಲು ರಾತ್ರಿ ಎನ್ನದೇ ಎಷ್ಟರ ಮಟ್ಟಿಗೆ ಸಾರಿಗೆ ಸಂಸ್ಥೆ ದುಡಿಸಿಕೊಂಡಿದೆ ಹಾಗೂ ದುಡಿಸಿಕೊಳ್ಳುತ್ತಿದೆ ಎಂಬದನ್ನು ತಿಳಿದುಕೊಳ್ಳಿ.


8. ಪ್ರತಿ ವರ್ಷ ಸಾರಿಗೆ ಸಂಸ್ಥೆ ಇಷ್ಟು ಕೋಟಿ ಲಾಭ ಗಳಿಸಿದೆ, ಅಷ್ಟು ಕೋಟಿ ಲಾಭ ಗಳಿಸಿದೆ ಎಂಬ ಸುದ್ದಿಯನ್ನು ನೀಡಿದ್ದೀರಿ. ಆ ಲಾಭದಲ್ಲಿ ಸಾರಿಗೆ ನೌಕರರ ಮಕ್ಕಳಿಗಾಗಿಯೇ ಇರುವಂತಹ ಒಂದೇ ಒಂದು ಶಾಲೆ ಇಲ್ಲ.

ಪೊಲೀಸರ ಮಕ್ಕಳಿಗಾಗಿ ಅವರದೇ ಆದ ಪೊಲೀಸ್ ಪಬ್ಲಿಕ್ ಶಾಲೆಗಳು ಇವೆ. 


9. ಸಾರಿಗೆ ನೌಕರರ ಮಕ್ಕಳಿಗಾಗಿ, ಒಂದು ಶಾಲೆ, ಸ್ವರ್ಧಾತ್ಮಕ ತರಬೇತಿ ಕೇಂದ್ರ, ನೌಕರರು ಹಾಗೂ ಅವರ ಕುಟುಂಬದವರಿಗೆ ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯವಿದೆ.



10. ರಾತ್ರಿ ಇಡೀ ನಿದ್ದೆ ಕೆಟ್ಟು ಡ್ರೈವಿಂಗ್ ಮಾಡುವ, ನಿದ್ದೆ ಬಂದರೂ ಮುಖದ ಮೇಲೆ ನೀರು ಸಿಡಿಸಿಕೊಂಡು ಮತ್ತೆ ಬಸ್ ಅನ್ನು ನಿಗಧಿತ ಸಮಯಕ್ಕೆ ಸರಿಯಾಗಿ ತಲುಪಿಸುವ ಅವರ ಕರ್ತವ್ಯ ನಿಷ್ಠೆ ನಿಮಗೆ ಹಾಗೂ ಸರ್ಕಾರಕ್ಕೆ ಏಕೆ ಅರ್ಥವಾಗುತ್ತಿಲ್ಲ.



ಇಷ್ಟೆಲ್ಲ ಮೂಲ ಸಮಸ್ಯೆ ಗಳಿದ್ರೂ ಅವೆಲ್ಲವನ್ನು ಬದಿಗೆ ಒತ್ತಿ,

ಸರ್ಕಾರದಿಂದ ಈಡೇರಿಸಲು ಆಗದೇ ಇರುವಂತಹ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟು ಮಾಡಬಾರದ ಸಮಸಯದಲ್ಲಿ ಮುಷ್ಕರ ಮಾಡಿ, ಸಾರ್ವಜನಿಕರರಿಗೆ ತೊಂದರೆ ಕೊಟ್ಡಿದ್ದಲ್ಲದೇ, 

ನಿಮಗೆ ಸಹಕಾರ ನೀಡಿದ ತಪ್ಪಿಗೆ ಸಾರಿಗೆ ನೌಕರರು ತಮ್ಮ ಉದ್ಯೋಗಗಳನ್ನು ಕಳೆದು ಕೊಂಡು ಇಂದು ಬೀದಿ ಪಾಲಾಗುವ ಹಾಗೆ ಮಾಡಿದ್ದೀರಿ.


ನೀವು ಸಾರಿಗೆ ನೌಕರರ ನಿಜವಾದ ಹೋರಾಟಗಾರರೇ / ಅಧ್ಯಕ್ಷರೇ ಆಗಿದ್ದಲ್ಲಿ, ಸರ್ಕಾರದ ಮೂಲಕವಾಗಲೀ, ನ್ಯಾಯಲಯದ ಮೂಲಕವಾಗಲೀ ಸಾರಿಗೆ ಸಂಸ್ಥೆಯಿಂದ ಶಿಕ್ಷೆ ಅನುಭವಿಸುತ್ತಿರುವ (ಅಮಾನತ್ತು, ವಜಾ, ಶೋಕಾಸ್ ನೋಟಿಸ್, ಜೈಲು / ಕೇಸ್ / ಇತ್ಯಾದಿ) ಎಲ್ಲಾರನ್ನು ಆರೋಪ ಮುಕ್ತರನ್ನಾಗಿ ಮಾಡಿ, ಮೊದಲಿನಂತೆಯೇ ತಾವು ಇದ್ದ ಸ್ಥಳ / ಘಟಕಗಳಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಮಾಡಲು ಸರ್ಕಾರ / ನ್ಯಾಯಲಯದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.


ಇಲ್ಲಇದ್ದಲ್ಲಿ , ಇದೇ ಸಾರಿಗೆ ನೌಕರರು ನಿಮ್ಮನ್ನು ನೋಡುವ ಸ್ಥಿತಿ ಹಾಗೂ ಮುಂಬರುವ ಮುಷ್ಕರಗಳಿಗೆ ನಿಮ್ಮ ಮಾತುಗಳಿಗೆ ಕಿಂಚಿತ್ತು ಬೆಲೆ ಇರುವುದಿಲ್ಲ. 

ನಿಮ್ಮ ನಾಯಕತ್ವದ ಅಸ್ಥಿತ್ವ ಕುಗ್ಗುವುದರಲ್ಲಿ ಎರಡು ಮಾತಿಲ್ಲ.



ಚೋಳರಾಜ್, ಬಳ್ಳಾರಿ.



Tuesday 29 November 2016


SHARABESHWARA B.Ed COLLEGE
Discovering the Teaching Talents and Shaping the Future.


        To identify and develop gifts and talents of every student by providing positive challenges, nurturing environment and visionary mentors. To create a life-long learning community of children, parents, researcher, thinkers, planners, artists, inventors, scientists, sportsmen, politicians, social entrepreneurs, administrators... who will respond to the future, enjoy the present and preserve the past.
To give a new direction to the teachers of the future. To create an educational infrastructure and programs to empower the teaching community to discover their talents and the genius in every child.

Thursday 21 January 2016

ಸಂದರ್ಶನ

              ಉದ್ಯೋಗಾಕಾಂಕ್ಷಿಗಳ ಜೀವನದಲ್ಲಿ ಸಂದರ್ಶನ ಬಹು ಮುಖ್ಯವಾದ ಅಂಶ. ಸಂದರ್ಶನದಲ್ಲಿ ಸಂದರ್ಶಕರ ಪ್ರಶ್ನೆಗೆ

ಜಾಣ್ಮೆಯಿಂದ ಉತ್ತರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ದೇಹಭಾಷೆ. ಇಂತಹ ವೇಳೆ ದೇಹಭಾಷೆಯನ್ನು

ಸರಿಯಾದ ರೀತಿಯಲ್ಲಿ ಬಳಸಿದರೆ ಭವಿಷ್ಯ ಉಜ್ವಲವಾಗುತ್ತದೆ. ಸಂದರ್ಶನದ ವೇಳೆ ನಿಮಗೇನು ಬೇಕೆಂದು, ನಿಮ್ಮಲ್ಲಿನ ಜಾಣೆ

 ಎಂತಹದೆಂದು, ನೀವೆಷ್ಟು ಕ್ರಿಯಾಶೀಲರು, ಸೃಜನಶೀಲರು ಎಂಬುದನ್ನು ನಿಮ್ಮ ಮಾತುಗಳಲ್ಲಿ ತಿಳಿಸಬಹುದು. ಆದರೆ ನಿಮ್ಮ

ದೇಹಭಾಷೆ ಇದಕ್ಕೆ ವಿರುದ್ದವಾಗಿದ್ದರೆ ಸಂದರ್ಶನ ವಿಫಲವಾಗುತ್ತದೆ. ದೇಹಭಾಷೆ ನಿಖರವಾಗಿಲ್ಲದಿದ್ದರೆ ನೀವೊಬ್ಬ

ವಿಶ್ವಾಸಾರ್ಹತೆಯಿಲ್ಲದ, ಅಭದ್ರತೆಯುಳ್ಳ ದುರಹಂಕಾರಿ ಎಂಬುದನ್ನು ತೋರಿಸಿದಂತಾಗುತ್ತದೆ. ಯಾವ ಸಂದರ್ಶಕರ

ತೀರ್ಮಾನಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದೋ ಗೊತ್ತಿಲ್ಲ. ಆದ್ದರಿಂದ ಸಂದರ್ಶನದ ದೇಹಭಾಷೆ ಹೀಗಿರಲಿ.

ಹಸ್ತಲಾಘವ : ಸಂದರ್ಶನದ ಕೊಠಡಿಯೊಳಗೆ ಪ್ರವೇಶಿಸಿದ ಕೂಡಲೇ ಅಲ್ಲಿನ ಸಂದರ್ಶಕರು ಕೈಕುಕಲು

ಮುಂದಾಗುವುದಕ್ಕಿಂತ ಮೊದಲು ನೀವು ಕೈಕುಲುಕಿ. ಇದು ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಮತ್ತು ಸಂದರ್ಶನಕ್ಕೆ ನೀವು

ಸಿದ್ದರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ.

     ಹೀಗೆ ಕೈಕುಲುಕುವಾಗ ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳುಗಳ ನಡುವೆ 45 ಡಿಗ್ರಿ ಅಂತರ ಇರಲಿ. ನಿಮ್ಮ ಹೆಬ್ಬೆರಳು

 ಮತ್ತು ತೋರುಬೆರಳಿನ ನಡುವಿನ ಚರ್ಮ ಕೈಕುಲುಕುವವರ ಕೈಗಳನ್ನು ಸ್ಪರ್ಶಿಸಲಿ. ಎಲ್ಲಾ ಬೆರಳುಗಳಿಂದ ಅವರ ಕೈಯನ್ನು

ಮುಚ್ಚಿ ಗಟ್ಟಿಯಾಗಿ ಹಿಡಿಯಿರಿ.

      ಹಗುರವಾದ ಕೈಕುಲುವಿಕೆಯನ್ನು ತಪ್ಪಿಸಿ. ಹಗುರವಾದ ಕೈಕುಲುಕುವಿಕೆಯಿಂದ ನೀವು ಅಧೀರರು, ಅನಿಶ್ಚಿತತೆ

ಅನುಭವಿಸುವವರು ಎಂಬುದನ್ನು ತೋರಿಸುತ್ತದೆ. ಅಂತೆಯೇ ಎರಡೂ ಕೈಗಳಿಂದ ಕೈಕುಲುಕಬೇಡಿ. ಅದು ನೀವು ತುಂಬಾ

ಪ್ರಬಲರು ಅಥವಾ ಅಭದ್ರತೆ ಸರಿದೂಗಿಸಲು ಪ್ರಯತ್ನಿಸುವವರು ಎಂಬುದನ್ನು ಸಾಬೀತುಪಡಿಸಿದಂತಾಗುತ್ತದೆ.

ಬೆವರನ್ನು ತಪ್ಪಿಸಿ : ನೀವು ಹೆಚ್ಚಾಗಿ ಬೆವರುತ್ತೀರಾ? ಹಾಗಿದ್ದರೆ ಸಂದರ್ಶನ ಕೊಠಡಿ ತಲುಪುವುದಕ್ಕಿಂತ ಮೊದಲು ಮುಖ

ತೊಳೆದುಕೊಂಡು ರಿಫ್ರೆಶ್ ಆಗಿ. ಕರವಸ್ತ್ರದಿಂದ ಕೈಗಳನ್ನು ಒಣಗಿಸಿಕೊಳ್ಳಿ.  ಸಂದರ್ಶನ ಕೊಠಡಿಯಲ್ಲಿ ಹಣೆ ಮತ್ತು ಕೈಗಳಲ್ಲಿನ

ಬೆವರನ್ನು ಕೈಗಳಿಂದ ಒರೆಸಬೇಡಿ. ಕರವಸ್ತ್ರ ಬಳಸಿ. ಹಸ್ತಲಾಘವ ನೀಡುವಾಗ ನಿಮ್ಮ ಕೈಗಳು ಒದ್ದೆಯಾಗಿದ್ದರೆ ನೀವು

ಅಧೀರರು, ಅನಿಶ್ಚಿತರು, ನರದೌರ್ಬಲ್ಯದಿಂದ ಬಳಲುವವರು ಎಂಬುದು ತಿಳಿಯುತ್ತದೆ.

ಕಣ್ಣುಗಳ ಸಂಪರ್ಕವಿರಲಿ : ಸಂದರ್ಶಕರೊಂದಿಗೆ ಸಂಭಾಷಣೆ ನಡೆಸುವಾಗ ನಿರಂತರವಾಗಿ ಕಣ್ಣುಗಳ ಸಂಪರ್ಕವಿರಲಿ.

ಸಂಭಾಷಣೆ ವೇಳೆ ಅತ್ತಿತ್ತ ನೋಡುತ್ತಿದ್ದರೆ ನೀವು ಅಸುರಕ್ಷಿತರು, ಅಪ್ರಾಮಾಣಿಕರು, ಅಸಡ್ಡೆಯುಳ್ಳವರು ಎಂಬುದು

ತಿಳಿಯುತ್ತದೆ. ಸಂದರ್ಶಕರು ಏಕಕಾಲದಲ್ಲಿ ನಿಮ್ಮೊಂದಿಗೆ ಸಂಭಾಷಿಸುತ್ತಾರೆ. ಅಂತಹ ವೇಳೆ ಎಲ್ಲರೊಂದಿಗೂ ನೇರ

ನೋಟದೊಂದಿಗೆ ಮಾತನಾಡಿ. ಪ್ರತಿಯೊಬ್ಬ ಸಂದರ್ಶಕರನ್ನು ಸಮಭಾವದಿಂದ ಗೌರವಿಸಿ. ಪ್ರಶ್ನೆಗೆ ಉತ್ತರಿಸುವಾಗ

ದೃಷ್ಟಿಯನ್ನು ದೂರ ಹಾಯಿಸಬೇಡಿ ಅಥವಾ ಕೆಳಗೆ ನೋಡಬೇಡಿ. ಪ್ರಶ್ನೆ ಕೇಳಿದವರ ಕಡೆ ನೋಟ ಹರಿಸಿ ಉತ್ತರಿಸಿ. ಕಣ್ಣುಗಳ

ಸಂಪರ್ಕದೊಂದಿಗೆ ಮಾತನಾಡುವುದರಿಂದ ನೀವು ಪ್ರಾಮಾಣಿಕರು ಹಾಗೂ ವೃತ್ತಿಯನ್ನು ಹೆಚ್ಚು ಪ್ರೀತಿಸುವವರು ಎಂಬುದು

ತಿಳಿಯುತ್ತದೆ.

ನೇರವಾಗಿ ಕುಳಿತುಕೊಳ್ಳಿ : ನಿಮಗೆ ಮೀಸಲಾದ ಆಸನದಲ್ಲಿನ ಬೆನ್ನಾಸರೆಗೆ ಒರಗಿ ನೇರವಾಗಿ ಸ್ಥಿರವಾಗಿ ಕುಳಿತುಕೊಳ್ಳಿ.

 ಹಗುರವಾಗಿ ಅಥವಾ ಒಂದುಕಡೆ ವಾಲಿದಂತೆ ಕುಳಿತರೆ ಅದು ನಿಮ್ಮ ಅಸ್ಥಿರತೆಯನ್ನು ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ.

ನಿಮ್ಮ ಭುಜಗಳನ್ನು ಸಾಮಾನ್ಯ ಮಟ್ಟಕ್ಕಿಂತ ಕೆಳಗಿರಲಿ. ಅಂತೆಯೇ ಸಂದರ್ಶಕರ ಸ್ಥಳವನ್ನು ಗೌರವಿಸಿ.

ಸ್ಥಿರವಾಗಿರಿ: ಕುಳಿತುಕೊಂಡಾಗ ನಿಮ್ಮ ಕಾಲುಗಳನ್ನು ಅಲುಗಾಡಿಸದೇ ಸ್ಥಿರವಾಗಿ ಕುಳಿತುಕೊಳ್ಳಿ. ಮಾತಿನ ಚಲನೆ ಹಾಗೂ

ಔಪಚಾರಿಕ ಭಂಗಿಯ ನಡುವೆ ಸಮತೋಲನ ಇರಲಿ. ಅನಾವಶ್ಯಕವಾಗಿ ಕೈಗಳನ್ನು ಚಲಿಸುವುದು ಅಥವಾ ಚಲಿಸದೇ

ಇರುವುದು ಸರಿಯಲ್ಲ. ಇದು ವ್ಯಕ್ತಿ ಗೊಂದಲದಲ್ಲಿದ್ದಾನೆ ಎಂಬುದನ್ನು ಹೇಳುತ್ತದೆ. ಆದ್ದರಿಂದ ಮಾತಿನ ಲಯಕ್ಕೆ ತಕ್ಕಂತೆ

ಕೈಗಳ ಚಲನೆ ಇರಲಿ.

ನಿರಾಳವಾಗಿರಿ : ನಿಮ್ಮ ಮಾತುಗಳು ಸಹಜವಾಗಿರಲಿ, ಹಿತ ಮಿತವಾಗಿರಲಿ. ಹೆಚ್ಚು ಆವೇಶಭರಿತರಾಗಬೇಡಿ. ಮಾನಸಿಕ

ಒತ್ತಡವನ್ನು ಸಮ ಮಟ್ಟದಲ್ಲಿ ಕಾಯ್ದುಕೊಳ್ಳಿ. ಅತೀಯಾದ ಒತ್ತಡ ಪ್ರದರ್ಶಿಸಬೇಡಿ. ಇದರಿಂದ ನೀವು ಉದಾಸೀನರೆಂಬುದು

ತಿಳಿಯುತ್ತದೆ.

ಒಪ್ಪಿಗೆಗೆ ಮಾತ್ರ ತಲೆದೂಗಿ : ಸಂದರ್ಶಕರು ಏನು ಹೇಳುತ್ತಾರೆ ಎಂಬುದನ್ನು ಅರ್ಥೈಸಿಕೊಳ್ಳದೇ ಅನಾವಶ್ಯಕವಾಗಿ

ತಲೆದೂಗಬೇಡಿ. ಅನಾವಶ್ಯಕವಾಗಿ ತಲೆದೂಗುವುದು ಅವಿಧೇಯತೆ ಮತ್ತು ಅಪ್ರಾಮಾಣಿಕತೆಯ ಸಂಕೇತ.

ಪ್ರಮುಖಾಂಶಗಳನ್ನು ಅರ್ಥಮಾಡಿಕೊಂಡಾಗ ಮತ್ತು ಅವರ ಹೇಳಿಕೆಯನ್ನು ಒಪ್ಪಿಕೊಂಡಾಗ ಮಾತ್ರ ತಲೆದೂಗಿ.

ಕೈಗಳನ್ನು ಕಟ್ಟಬೇಡಿ : ಸಂದರ್ಶಕರ ಎದುರು ಕೈಕಟ್ಟಿ ಕೂರಬೇಡಿ. ಕೈಕಟ್ಟುವುದು ನಿಮ್ಮಲ್ಲಿನ ವಿಶ್ವಾರ್ಹತೆ ಮತ್ತು ಆಸಕ್ತಿಯ

ಕೊರತೆಯನ್ನು ಎತ್ತಿ ತೋರುತ್ತದೆ. ಕೈಗಳು ನಿಮ್ಮ ತೊಡೆಯ ಮೇಲಿರಲಿ ಅಥವಾ ಟೇಬಲ್ ಮೇಲಿರಲಿ. ಇದು ಸಂಭಾಷಣೆಗೆ

ಮುಕ್ತವಾಗಿ ಕೈಗಳನ್ನು ಚಲಿಸಲು ಸಹಾಯಕವಾಗುತ್ತದೆ. ಹಾಗೂ ಇತರರ ಮಾತುಗಳನ್ನು ಆಸಕ್ತಿಯಿಂದ ಕೇಳುತ್ತೀರಿ

ಎಂಬುದನ್ನು ತಿಳಿಸುತ್ತದೆ.

ಬೆರಳುಗಳನ್ನು ಹಿಸುಕಬೇಡಿ : ಸಂದರ್ಶಕರ ಎದುರು ಪದೇ ಪದೇ ಬೆರಳುಗಳನ್ನು ಹಿಸುಕಬೇಡಿ. ಇದು ನಿಮ್ಮಲ್ಲಿನ ಅಸ್ಥಿರತೆ

 ಹಾಗೂ ಅಸ್ಪಷ್ಟತೆಯ ಸಂಕೇತ. ಬೆರಳುಗಳಿಂದ ಮೇಜಿನ ಮೇಲೆ ಕುಟ್ಟಬೇಡಿ, ಲಯಬದ್ದ ಚಲನೆಯನ್ನು ಮಾಡಬೇಡಿ. ಇದು

ಸಂದರ್ಶಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಒಟ್ಟಾರೆ ಬೆರಳುಗಳಿಂದ ಯಾವುದೇ ರೀತಿಯ ಶಬ್ದ ಉಂಟಾಗದಂತೆ

ಎಚ್ಚರವಹಿಸಿ.

ಅನಪೇಕ್ಷಿತ ಶಬ್ದ ಬೇಡ : ಕೆಲವರು ಮಾತನಾಡುವಾಗ ಗಂಟಲು, ನಾಲಿಗೆ, ತುಟಿ, ಮೂಗುಗಳಿಂದ ವಿಚಿತ್ರ ಶಬ್ದ

ಹೊರಡಿಸುತ್ತಾರೆ. ಇದು ನೋಡುಗರಿಗೆ ಕೇಳುಗರಿಗೆ ಅಸಹ್ಯವನ್ನುಂಟು ಮಾಡುತ್ತದೆ. ಆದ್ದರಿಂದ ಮಾತನಾಡುವಾಗ ವಿಚಿತ್ರ

ಶಬ್ದಗಳನ್ನು ಹೊರಡಿಸಬೇಡಿ. ಸ್ವಾಭಾವಿಕವಾಗಿ ಮಾತನಾಡಿ. ಪದೇ ಪದೇ ಗಲ್ಲ, ತುಟಿ, ಕೆನ್ನೆ, ಮೂಗು, ಕಿವಿಗಳನ್ನು

ಕೆರೆಯುವುದು, ಕಣ್ಣೊರೆಸಿಕೊಳ್ಳುವುದು ಮಾಡಬೇಡಿ. ಇದು ನಿಮ್ಮ ಅವಿಶ್ವಾಸವನ್ನು ವೃತ್ತಿಯಲ್ಲಿನ ನಿರಾಸಕ್ತಿಯನ್ನು

ಸೂಚಿಸುತ್ತದೆ.

       ಮೇಲಿನ ಅಂಶಗಳನ್ನು ಪಾಲಿಸಿ ನಿಮ್ಮದೇ ಅದ ದೇಹಭಾಷೆ ಬೆಳೆಸಿಕೊಂಡರೆ ನೀವೊಬ್ಬ ಅತ್ಯುತ್ತಮ ಅಭ್ಯರ್ಥಿ

ಎಂಬುದನ್ನು ಸಾಬೀತುಪಡಿಸಬಹುದು ಜೊತೆಗೆ ವೃತ್ತಿಯಲ್ಲಿ ಯಶಸ್ಸು ಗಳಿಸಬಹುದು.

ಅಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳು

★ ಅಸಂಪ್ರದಾಯಿಕ ಅಥವಾ ನವೀಕರಿಸಬಹುದಾದ ಅಥವಾ ಸುಸ್ಥಿರ ಪರಿಸರ ಸ್ನೇಹಿ ಶಕ್ತಿ ಸಂಪನ್ಮೂಲಗಳು ಯಾವವು?  ಚರ್ಚಿಸಿರಿ.


ಇಂದು ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳು ಬಹಳಷ್ಟು ಬರಿದಾಗಿದ್ದು, ಅವುಗಳ ಉತ್ಪಾದನೆ ಮತ್ತು ಬಳಕೆಯು ಬಹಳಷ್ಟು ಪರಿಸರ ಮಾಲಿನ್ಯವನ್ನು ಉಂಟು ಮಾಡಿದೆ. ಮುಂದಿನ ಜಗತ್ತು ಪರಿಸರ ಮಾಲಿನ್ಯದಿಂದ ಮುಕ್ತವಾಗಬೇಕಾದಲ್ಲಿ ಮಾಲಿನ್ಯವನ್ನು ಉಂಟು ಮಾಡದ, ಪುನರ್ ಉತ್ಪಾದಿಸಬಹುದಾದ

ಅಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು ಸೂಕ್ತ ತಂತ್ರಜ್ಞಾನದ ಮೂಲಕ ಸಂಶೋಧಿಸಿ ಅಭಿವೃದ್ದಿಪಡಿಸಿ ಬಳಸಿಕೊಳ್ಳಬೇಕು.


ಶಕ್ತಿ ಸಂಪನ್ಮೂಲಗಳ ಬಳಕೆಯು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಹಾಗೂ ಪರಿಸರ ಮತ್ತು ಆರ್ಥಿಕ ಸ್ಥಿರತೆ ಗುರಿಯನ್ನು ಅಂದರೆ ಸುಸ್ಥಿರ ಪರಿಸರವನ್ನು ಸಾಧಿಸುವ ಸಾಧನವಾಗಬೇಕು. ಈ ಕಾರಣಕ್ಕಾಗಿ ಪರಿಸರ ಸ್ನೇಹಿ ಅಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು ಬಳಕೆ ಮಾಡುವುದು ಅತ್ಯವಶ್ಯಕವಾಗಿದೆ.


1.ಜೈವಿಕ ಅನಿಲ (Bio-gas) :


ಜಾನುವಾರುಗಳ ಅಂದರೆ ದನಕರುಗಳ ಸಗಣಿ, ಮತ್ತಿತರ ಕೃಷಿ ತ್ಯಾಜ್ಯಗಳನ್ನು ಹುದುಗಿಸಿ ಅದರಿಂದ ಉತ್ಪಾದಿಸಲಾಗುವ ಮಿಥೈಲ್ ಅನಿಲವನ್ನು ಜೈವಿಕ ಅನಿಲ ಎನ್ನಲಾಗಿದೆ.


— ಇದನ್ನು ಅಡುಗೆ ಮಾಡಲು, ಬೆಳಕಿಗಾಗಿ, ಶಾಖಕ್ಕಾಗಿ ಹಾಗೂ ಸಣ್ಣ ಸಣ್ಣ ಕೃಷಿ ಚಟುವಟಿಕೆಗಳಲ್ಲಿ ಯಂತ್ರಗಳ ಚಾಲನೆಗೆ ಬಳಕೆ ಮಾಡಲಾಗುತ್ತಿದೆ. ಇದು ಹೊಗೆ ರಹಿತವಾಗಿದ್ದು, ಪರಿಸರ ಸ್ನೇಹಿಯಾಗಿದೆ. ಹಾಗೂ ಇದು ಉರುವಲಿಗಾಗಿ ಅರಣ್ಯನಾಶವನ್ನು ತಡೆಯುತ್ತದೆ. ಕೃಷಿ ಪ್ರಧಾನವಾದ ಭಾರತ ಹಳ್ಳಿಗಳ ರಂಷಂಔಛಿವಾಗಿದ್ದು, ಪಶು ಸಂಪತ್ತು ಹೇರಳವಾಗಿದ್ದು, ಜೈವಿಕ ಅನಿಲ ತಯಾರಿಕೆಗೆ ಯಥೇಚ್ಛ ಅವಕಾಶಗಳಿವೆ. ಜೈವಿಕ ಅನಿಲ ಸ್ಥಾವರಗಳ ಸ್ಥಾಪನೆಗೆ ಸರ್ಕಾರ ಸಹಾಯಧನವನ್ನು ನೀಡುತ್ತಿದೆ.


— 'ದೀನಬಂಧು' ಎಂಬುದು ಜನಪ್ರಿಯವಾದ ಅನಿಲ ಸ್ಥಾವರದ ಮಾದರಿಯಾಗಿದ್ದು, ರೇಷ್ಮೆ ಹುಳುವಿನ ತ್ಯಾಜ್ಯದಿಂದಲೂ ಜೈವಿಕ ಅನಿಲವನ್ನು ಉತ್ಪಾದಿಸಬಹುದು. ಹಾಸನ ಜಿಲ್ಲೆಯ ರಂಗೇನಹಳ್ಳಿ ಕೊಪ್ಪಲು ಗ್ರಾಮ ಕರ್ನಾಟಕ  ರಾಜ್ಯದಲ್ಲೇ ಪ್ರಪ್ರಥಮ ಹಾಗೂ ಸಂಪೂರ್ಣ ಜೈವಿಕ ವಿದ್ಯುತ್ ಆಧಾರಿತ ಗ್ರಾಮವಾಗಿದೆ.


2.ಪವನ ಶಕ್ತಿ (Wind Energy) :


ವೇಗವಾಗಿ ಬೀಸುವ ಗಾಳಿಯಿಂದ ರಾಟೆಗಳನ್ನು ತಿರುಗಿಸಿ ಉತ್ಪಾದಿಸುವ ಶಕ್ತಿಗೆ ಪವನ ಶಕ್ತಿ ಎಂದು ಹೆಸರು.


— ನಮ್ಮ ದೇಶದಲ್ಲಿ ಪ್ರಥಮ ಬಾರಿಗೆ 1996 ರಲ್ಲಿ ಕರ್ನಾಟಕ ರಾಜ್ಯದ ಗದಗ್ ಜಿಲ್ಲೆಯ ಕಪ್ಪತಗುಡ್ಡ ದಲ್ಲಿ ಗಾಳಿ ಯಂತ್ರವನ್ನು ಸ್ಥಾಪಿಸಲಾಯಿತು.


— ಇಂದು ಭಾರತದ ಅನೇಕ ರಾಜ್ಯಗಳಲ್ಲಿ ಯಥೇಚ್ಛವಾಗಿ ಗಾಳಿ ಯಂತ್ರಗಳನ್ನು ಸ್ಥಾಪಿಸಲಾಗಿದ್ದು, ಭಾರತದಲ್ಲಿ ನಿರಂತರವಾಗಿ 45,000 ಮೆ.ವ್ಯಾ. ನಷ್ಟು ಪವನಶಕ್ತಿಯನ್ನು ಉತ್ಪಾದಿಸಬದೆಂದು ಅಂದಾಜು ಮಾಡಲಾಗಿದೆ.


— ಗಾಳಿ ಶಕ್ತಿ ಉತ್ಪಾದನೆಯಲ್ಲಿ ದೇಶದಲ್ಲಿಯೇ ತಮಿಳುನಾಡು ಪ್ರಥಮ ಸ್ಥಾನದಲ್ಲಿದೆ. ಪವನಶಕ್ತಿಯನ್ನು ಹೆಚ್ಚಾಗಿ ಖಾಸಗಿ ಕ್ಷೇತ್ರದಲ್ಲಿ ಉತ್ಪಾದಿಸುತ್ತಿದ್ದು, ನಂತರ ಇದನ್ನು ಸರ್ಕಾರದ  ವಿದ್ಯುತ್ಜಾಲಕ್ಕೆ ಮಾರಾಟ ಮಾಡಲಾಗುತ್ತಿದೆ.


— ಜರ್ಮನಿ, ಅಮೇರಿಕಾ, ಡೆನ್ಮಾರ್ಕ್, ಸ್ಪೈನ್, ದೇಶಗಳನ್ನು ಬಿಟ್ಟರೆ, ಪವನಶಕ್ತಿಯ ಉತ್ಪಾದನೆಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ.


— ಪವನಶಕ್ತಿ ಕೇವಲ ಪರ್ಯಾಯವಲ್ಲ . ಅಕ್ಷಯ ಪಾತ್ರೆಯಾಗಿದೆ. ತಣ್ಣನೆಯ ಕೆಂಡ ಎಂದು ಕರೆಸಿಕೊಳ್ಳುವ ಪವನಶಕ್ತಿಯ ಉತ್ಪಾದನೆಯಲ್ಲಿ ಅನೇಕ ದೇಶಿಯ ಮತ್ತು ವಿದೇಶಿಯ ಖಾಸಗಿ ಕಂಪನಿಗಳು ತೊಡಗಿವೆ.


* ಅವುಗಳೆಂದರೆ,

— ಸುಜಲಾನ್- 7500 ಮೆ.ವ್ಯಾ.(ಭಾರತ),

— ಎನರ್ಖಾನ್ -2500 ಮೆ.ವ್ಯಾ (ಜರ್ಮನಿ),

— ವೆಸ್ಪಾಜ್-600 ಮೆ.ವ್ಯಾ (ಇಂಗ್ಲೇಂಡ್),

— ಸದರ್ನ್ ವಿಂಡ್ ಪಾರ್-1000 ಮೆ.ವ್ಯಾ. (ಭಾರತ)

— ಚಿರಂಜೀವಿ-500 ಮೆ.ವ್ಯಾ. (ಭಾರತ)

— ವೆಸ್ಪಾಜ್ ಆರ್.ಆರ್.ಬಿ-500 ಮೆ.ವ್ಯಾ (ಹಾಲೆಂಡ್)



3.ಸೌರಶಕ್ತಿ ಅಥವಾ ಸೌರವಿದ್ಯುತ್ (Solar Power) :

ಸೂರ್ಯನ ಕಿರಣಗಳ ಬಳಕೆಯಿಂದ ತಯಾರಿಸಲಾಗುವ ಶಕ್ತಿಯನ್ನು ಸೌರಶಕ್ತಿ ಅಥವಾ ಸೌರವಿದ್ಯುತ್ ಎನ್ನಲಾಗಿದೆ.


— ವೈಜ್ಞಾನಿಕವಾಗಿ ಕಲೆಕ್ಟರ್ ಎಂಬ ಉಪಕರಣದ ಮೂಲಕ ಸೂರ್ಯನ ಕಿರಣಗಳನ್ನು ಸಂಗ್ರಹಿಸಿ ಸೌರಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ.


— ಸೌರಶಕ್ತಿಯನ್ನು ಶಾಖ ಹಾಗೂ ವಿದ್ಯುತ್ಚ್ಛಕ್ತಿಯನ್ನಾಗಿ ಪರಿವರ್ತಿಸಿ ಸೋಲಾರ್ ವಾಟರ್ಹೀಟರ್ಸ್, ಸೋಲಾರ್ ಡ್ರೈಯರ್ಸ್, ಸೋಲಾರ್ ಕುಕ್ಕರ್, ಸೌರ ವಿದ್ಯುತ್ ಕೋಶ ಮುಂತಾದ ಸೌರ ಉಪಕರಣಗಳ ಮೂಲಕ ಸೌರಶಕ್ತಿಯನ್ನು ಅಡುಗೆ ಮಾಡಲು, ದೀಪ ಬೆಳಗಿಸಲು, ದ್ವಿಚಕ್ರವಾಹನ, ರಿಕ್ಷಾ, ಕಾರು,ವಿಮಾನಗಳ ಚಾಲನೆಯಲ್ಲಿ, ಕೃಷಿ ಯಂತ್ರಗಳ ಚಾಲನೆಯಲ್ಲಿ, ಹಣ್ಣು ಒಣಗಿಸಲು, ಕ್ಯಾಮರಾ ಚಾಲನೆಯಲ್ಲಿ, ಮೊಬೈಲ್ನಲ್ಲಿ ಬ್ಯಾಟರಿಯಾಗಿ ಬಳಸಬಹುದಾಗಿದೆ.


— ಭಾರತದಲ್ಲಿ ಇತ್ತೀಚೆಗೆ ಘೋಷಣೆಯಾಗಿರುವ 'ಜವಾಹರಲಾಲ್ ರಾಷ್ಟ್ರೀಯ ಸೋಲಾರ್ ಮಿಷನ್' ಕಾರ್ಯಕ್ರಮದಡಿ ಮನೆಗಳ ಛಾವಣಿಯ ಮೇಲೆ ಸೋಲಾರ್ ಫ್ಯಾನ್ ಗಳಿಂದ ವಿದ್ಯುತ್ ಉತ್ಪಾದಿಸುವುದನ್ನು ಪ್ರೋತ್ಸಾಹಿಸಲಾಗುತ್ತಿದೆ.


— ತಿರುಪತಿಯ ತಿರುಮಲ ದೇವಸ್ಥಾನ, ರಾಜಸ್ತಾನದ ಮೌಂಟ್ಅಬು, ಶೃಂಗೇರಿಯ ಶಾರದಪೀಠ, ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಕ್ಷೇತ್ರದಲ್ಲಿ ಅಡುಗೆ ಮಾಡಲು ದೊಡ್ಡ ಪ್ರಮಾಣದ ಸೋಲಾರ್ ಕುಕ್ಕರನ್ನು ಬಳಕೆ ಮಾಡಲಾಗುತ್ತದೆ.


— ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲ್ಲೂಕಿನ ಯಳೆಸಂದ್ರ ಗ್ರಾಮದಲ್ಲಿ 59 ಕೋಟಿ ರೂ.ಗಳ ವೆಚ್ಚದಲ್ಲಿ 3 ಮೆ.ವ್ಯಾ.ಸಾಮಥ್ರ್ಯದ ದೇಶದ ಮೊಟ್ಟಮೊದಲ ಸೌರವಿದ್ಯುತ್ ಘಟಕವನ್ನು 2010 ರ ಜೂನ್ 17 ರಂದು ಸ್ಥಾಪಿಸಲಾಗಿದೆ.


— ಇತ್ತೀಚೆಗೆ ಸೌರಶಕ್ತಿ ಚಾಲಿತ ಯು.ಪಿ.ಎಸ್. ಸೌರವಿದ್ಯುತ್ಕೋಶವನ್ನು ಮೈಸೂರಿನ ಇನೋವೇಷನ್ಸ್ ಸಂಸ್ಥೆ ಕಂಡುಹಿಡಿದು ಮಾರುಕಟ್ಟೆಗೆ ಪರಿಚಯಿಸಿದೆ.


— ಕರ್ನಾಟಕದ ಹುಬ್ಬಳ್ಳಿಯಲ್ಲಿ ಶ್ರೀ ಶಿವಸಿಂಪಿಗೇರ ಎಂಬ ವಿಜ್ಞಾನ ಪದವೀಧರ ಸೋಲಾರ್ ಮ್ಯೂಜಿಯಂನ್ನು ಸ್ಥಾಪಿಸಿದ್ದಾರೆ.


— ಆಂಧ್ರ ಪ್ರದೇಶದ ಬ್ಯಾಸನಿವರಪಳ್ಳಿ ಎಂಬ ಗ್ರಾಮ ಇಡೀ ಪ್ರಪಂಚದಲ್ಲಿಯೇ ಹೊಗೆ ಆಡದ ಸಂಪೂರ್ಣ ಸೂರ್ಯಶಾಖಮಯ ಗ್ರಾಮ ಎಂಬ ಹೆಸರು ಪಡೆದಿದೆ.


— ಬೆಂಗಳೂರಿನವರೇ ಆದ ಸೈಯದ್ ಸಾಜನ್ ಮಹಮ್ಮದ್ ಎಂಬುವವರು 2004 ರಲ್ಲಿ ವಿದ್ಯುತ್ ಮತ್ತು ಸೋಲಾರ್ ಸಹಾಯದಿಂದ ಚಲಿಸುವ ಕಾರೊಂದನ್ನು (ಕಾಟ್) ಮಾರುಕಟ್ಟೆಗೆ ಪರಿಚಯಿಸಿದ್ದಾರೆ.





4.ಸಮುದ್ರದ ಅಲೆಗಳ ಶಕ್ತಿ :

ಸಮುದ್ರದ ಅಲೆಗಳ ರಭಸದಿಂದ ತಯಾರಿಸುವ ಶಕ್ತಿಗೆ ಅಲೆಗಳ / ತೆರಗಳ ಶಕ್ತಿ ಎಂದು ಕರೆಯಲಾಗಿದೆ.


— ಭಾರತವು ಮೂರು ಕಡೆ ವಿಶಾಲವಾದ ಸಮುದ್ರ ತೀರವನ್ನು ಹೊಂದಿದ್ದು, ಪೂರ್ವ ಮತ್ತು ಪಶ್ಚಿಮದ ತೀರ ಪ್ರದೇಶಗಳಲ್ಲಿ ಅಲೆಗಳ ಶಕ್ತಿ ತಯಾರಿಸ ಬಹುದಾಗಿದೆ. ಭಾರತದ ಈ ಮೂಲದಿಂದ ಸುಮಾರು 50,000 ಮೆ.ವ್ಯಾ.ನಷ್ಟು ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯ ಪಡೆದಿದೆ.


— ಸಧ್ಯದಲ್ಲಿ ಗುಜರಾತಿನ ಕಚ್, ಕ್ಯಾಂಬೆ, ಪಶ್ಚಿಮ ಬಂಗಾಳದ ಸುಂದರ್ಬನ್ಸ್ ಹಾಗೂ ಕೇರಳದ ವಿಜಿನ್ಜಾಮ್ನಲ್ಲಿ ಇಂತಹ ಪ್ರಯತ್ನ ಮಾಡಲಾಗಿದೆ.



5.ಭೂಶಾಖೋತ್ಪನ್ನ ಶಕ್ತಿ :

ಭೂಮಿಯ ಅಂತರಾಳದಲ್ಲಿರುವ ಶಾಖ ಅಥವಾ ಉಷ್ಣತೆಯನ್ನು ಬಳಸಿಕೊಂಡು ಉತ್ಪಾದಿಸಲಾಗುವ ಶಕ್ತಿಗೆ ಭೂ ಶಾಖೋತ್ಪನ್ನ ಶಕ್ತಿ ಎಂದು ಹೆಸರು.


— ಭೂಮಿಯ ಹೊರಚಿಪ್ಪಿನ 10 ಕಿ.ಮೀ.ಆಳದವರೆಗಿನ ಉಷ್ಣತೆಯನ್ನು ಈ ಉದ್ದೇಶಕ್ಕೆ ಬಳಸಬಹುದು.


— ಹೈದರಾಬಾದ್ ನಲ್ಲಿರುವ ರಾಷ್ಟ್ರೀಯ ಭೂ ಔಷ್ಣೀಯ ಸಂಶೋಧನಾ ಸಂಸ್ಥೆ ಈಗಾಗಲೇ 30000'ಛಿ ಉಷ್ಣವು ಪುಟಿಯುವ ಪ್ರದೇಶಗಳನ್ನು ಗುರುತಿಸಿದೆ. ಅವುಗಳೆಂದರೆ, ಜಾರ್ಖಂಡ್, ಉತ್ತರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಛತ್ತೀಸ್ಗಢ್ ಮುಂತಾದ ರಾಜ್ಯಗಳ ಕೆಲವು ಪ್ರದೇಶಗಳು. ಇವುಗಳಲ್ಲಿ ಕುಲು, ಮನಾಲಿ ಮತ್ತು ಸಟ್ಲೇಜ್ ಕಣಿವೆಗಳಲ್ಲಿ ಭೂಗರ್ಭ ಶಕ್ತಿಯ ಉತ್ಪಾದನೆಗೆ ಪ್ರಯತ್ನಿಸಲಾಗಿದೆ.



 6. ಬಯೋಮಾಸ್ ಅಥವಾ ಜೈವಿಕ ಇಂಧನ  (Bio-mas) :

ನಗರ ಪ್ರದೇಶದ ದೊಡ್ಡ ಪ್ರಮಾಣದ ಕಸಕಡ್ಡಿಗಳ ತ್ಯಾಜ್ಯ ಮತ್ತು ಕೃಷಿ ತ್ಯಾಜ್ಯ ವಸ್ತುಗಳಾದ ಕಡಲೆಕಾಯಿ ಸಿಪ್ಪೆ, ಕಾಳುಗಳ ಸಿಪ್ಪೆ, ಭತ್ತದ ಹೊಟ್ಟು, ತೆಂಗಿನ ಚಿಪ್ಪು, ಹಾಗೂ ಕಬ್ಬಿನ ಸಿಪ್ಪೆ ಮುಂತಾದವುಗಳಿಂದ ತಯಾರಿಸುವ ಶಕ್ತಿಗೆ ಬಯೋಮಾಸ್ ಇಂಧನ ಎಂದು ಹೆಸರು.


— ಈಗಾಗಲೇ ಸುಮಾರು 100 ಸಕ್ಕರೆ ಕಾರ್ಖಾನೆಗಳು ಕಬ್ಬಿನ ಸಿಪ್ಪೆಯಿಂದ 950 ಮೆ.ವ್ಯಾನಷ್ಟು ಹೆಚ್ಚುವರಿ ವಿದ್ಯುತ್ನ್ನು ಉತ್ಪಾದಿಸುತ್ತಿವೆ. ದೇಶದಲ್ಲಿ 19500 ಮೆ.ವ್ಯಾ.ವ್ಯಾನಷ್ಟು ಬಯೋಮಾಸ್ ಇಂಧನ ತಯಾರಿಸುವ ಸಾಮಥ್ರ್ಯವಿದೆ ಎಂದು ಅಂದಾಜಿಸಲಾಗಿದೆ.ಇದರಲ್ಲಿ ಸಕ್ಕರೆ ಕಾರ್ಖಾನೆಗಳ ಪಾಲು 3,500 ಮೆ.ವ್ಯಾ. ಗಳಷ್ಟಾಗಿದೆ.



7.ಜೈವಿಕ ಡೀಸೆಲ್  (Bio-diesel) :

ಭಾರತದಲ್ಲಿ ಜೈವಿಕ ಇಂಧನಗಳ ತಯಾರಿಕೆ ಹೆಚ್ಚು ಅವಕಾಶವಿದೆ. ಅಂದರೆ ನಮ್ಮಲ್ಲಿ ದೊರೆಯುವ ಬೇವು, ಹೊಂಗೆ ಬೀಜಗಳ ಜೊತೆಗೆ ಜತ್ರೋಪ ಮತ್ತು ಸಿಮೆರೂಬ ಗಿಡಗಳನ್ನು ಬೆಳೆದು ಅವುಗಳ ಬೀಜದಿಂದ ಎಣ್ಣೆಯಿಂದ ತೆಗೆಯಬಹುದು.


— ಈ ಎಣ್ಣೆಯನ್ನು ಪೆಟ್ರೋಲ್ ಮತ್ತು ಡೀಸೆಲ್ ಜೊತೆ ಮಿಶ್ರಣ ಮಾಡಿ ವಾಹನಗಳಿಗೆ ಬಳಸಬಹುದು.


— ಈಗಾಗಲೇ ಕರ್ನಾಟಕದ ದಾವಣಗೆರೆಯ ಹತ್ತಿರ ಒಂದು ಜೈವಿಕ ಡೀಸೆಲ್ ಬಂಕ್ ಕಾರ್ಯನಿರ್ವಹಿಸುತ್ತಿದೆ.

SHARABESWARA B.Ed COLLEGE,BELLARY